DCP West Bengaluru City
3,513 posts
Official Twitter account of DCP, West Division (ಉಪ ಪೊಲೀಸ್ ಆಯುಕ್ತರು, ಪಶ್ಚಿಮ ವಿಭಾಗ)Dial Namma-112 in case of emergency, Help us to serve you better @BlrCityPolice
- ವಿಜಯನಗರ ಪೊಲೀಸ್ ಠಾಣೆಯ ಬಳಿ ಅಸಹಾಯಕರಾಗಿ ಕಂಡ ಅಂಧ ದಂಪತಿಗಳ ಜೀವನ ನಿರ್ವಹಣೆಗಾಗಿ ದಿನಸಿ ಪದಾರ್ಥಗಳನ್ನು & ಅವರ ಇಬ್ಬರು ಪುಟ್ಟ ಮಕ್ಕಳ ಪೋಷಣೆಗಾಗಿ ಅಗತ್ಯವಿದ್ದ ಸಾಮಾಗ್ರಿ & ಔಷಧಿಗಳನ್ನು ಪೂರೈಸುವ ಮೂಲಕ ಮಾನವೀಯತೆ ಮೆರೆದ ಶ್ರೀ.ಮನು, ಪಿ.ಎಸ್.ಐ @vijayanagaraps ರವರನ್ನು ತುಂಬು ಹೃದಯದಿಂದ ಶ್ಲಾಘಿಸುತ್ತೇವೆ @BlrCityPolice.
- ಲಿಂಗೈಕರಾದ ಡಾ.ಶ್ರೀ ಶಿವಕುಮಾರ ಸ್ವಾಮಿಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ. 💐 ದು:ಖದಲ್ಲಿರುವ ಸಮಸ್ತ ಭಕ್ತಾಭಿಮಾನಿಗಳ ಶೋಕದಲ್ಲಿ ನಾವು ಸಹ ಭಾಗಿ. ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಎಲ್ಲರ ಹಿತಕ್ಕಾಗಿ ದುಡಿದ ಮಹಾನ್ ಚೇತನ ನಡೆದಾಡುವ ದೇವರು Shri #ShivakumaraSwamiji 🙏🏻
- ಸೂರ್ಯನೊಬ್ಬ, ಚಂದ್ರನೊಬ್ಬ, ರಾಜನೊಬ್ಬ, ಈ ರಾಜನು ಒಬ್ಬ #ಡಾ_ರಾಜಕುಮಾರ್ ಅಣ್ಣಾವ್ರ ಜನ್ಮದಿನದ ಸವಿನೆನಪು 💛❤ Tributes to #DrRajKumar on his Birth anniversary.
- ಮೇಜಸ್ಟಿಕ್ ಪ್ರದೇಶದಲ್ಲಿ ಬಿಬಿಎಂಪಿ ಸಹಯೋಗದೊಂದಿಗೆ ಘನ ನ್ಯಾಯಾಲಯದ ಆದೇಶದ ಮೇರೆಗೆ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಿ, ಪಾದಚಾರಿ ಮಾರ್ಗಗಳನ್ನು ಸುಗಮಗೊಳಿಸಲಾಗಿದೆ. @BlrCityPolice @BBMPCOMM #Majestic
- ಯಾರು ನೀರಿನಿಂದ ಸ್ನಾನ ಮಾಡುತ್ತಾನೋ ಅವನು ಕೇವಲ ಬಟ್ಟೆಯನ್ನು ಮಾತ್ರ ಬದಲಿಸುತ್ತಾನೆ..... ಆದರೆ ಯಾರು ಬೆವರಿನಿಂದ ಸ್ನಾನ ಮಾಡುತ್ತಾನೋ ಅವನು ಇತಿಹಾಸವನ್ನೇ ಬದಲಿಸುತ್ತಾನೆ. #ಶುಭರಾತ್ರಿ #ಶುಭಸಂದೇಶ
- ಸರಗಳ್ಳನನ್ನು ಹಿಡಿದು ನೂರಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಮಾಡಿದ ಜ್ಞಾನಭಾರತಿ ಪೊಲೀಸ್ ಠಾಣೆಯ ಸಿಬ್ಬಂದಿ ಶ್ರೀ.ಚಂದ್ರಕುಮಾರ್ ರವರಿಗೆ ಅತ್ಯುತ್ತಮ ಕರ್ತವ್ಯವನ್ನು ಗುರುತಿಸಿ ಒಂದು ಲಕ್ಷ ನಗದು ಬಹುಮಾನ, ಒಂದು ಪಲ್ಸರ್ ಬೈಕ್ ಮತ್ತು ರಜೆಯೊಂದಿಗೆ ಕುಟುಂಬ ಸಮೇತ ಪ್ರವಾಸ ಆಯೋಜಿಸುವುದರ ಮೂಲಕ ಗೌರವಿಸಲಾಯಿತು. #Rewarded #ChandraKumarHC
- ಯಶಸ್ವಿ ಮತದಾನಕ್ಕಾಗಿ ಹಗಲು-ಇರುಳು ಶ್ರಮಿಸಿದ ಎಲ್ಲಾ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು, ಅರೆಸೇನಾ ಪಡೆ, ಗೃಹರಕ್ಷಕ ದಳ ಹಾಗೂ ಚುನಾವಣೆ ನಿಯೋಜಿತ ಎಲ್ಲಾ ಅಧಿಕಾರಿ ಸಿಬ್ಬಂದಿವರ್ಗದವರಿಗೆ ಧನ್ಯವಾದಗಳು #GotInked #LokSabhaElections2019
- ತುಂಬ ಒಳ್ಳೆಯ ಪುಸ್ತಕಗಳನ್ನು ಓದುವುದೆಂದರೆ ಹಿಂದಿನ ಶತಮಾನಗಳ ಅತ್ಯುತ್ತಮ ಮನಸ್ಸುಗಳ ಜತೆ ಸಂವಾದಿಸಿದಂತೆ.
- ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು. ಆದರೆ ಕನಸುಗಳಿಲ್ಲದ ದಾರಿಯಲ್ಲಿ ನಡೆಯಲಾಗುವುದಿಲ್ಲ.
- ಅತ್ಯಂತ ಸಜ್ಜನ, ಶುದ್ಧ ಹಸ್ತ, ಕರ್ತವ್ಯವೇ ದೇವರೆಂದು ತಿಳಿದ ಮಹಾನ್ ಮಾನವತಾವಾದಿಯಾಗಿದ್ದ ನಮ್ಮೆಲ್ಲರ ನಲ್ಮೆಯ ಶ್ರೀ. ಮಧುಕರ ಶೆಟ್ಟಿ ಯವರ ಆತ್ಮಕ್ಕೆ ಶಾಂತಿ ದೊರಕಲಿ. ಸರ್ ನಿಮ್ಮ ಅಕಾಲಿಕ ಮರಣ ನಮಗೆ ನೋವುಂಟು ಮಾಡಿದೆ. ಇವರ ಅಗಲಿಕೆ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ದೇವರು ಕರುಣಿಸಲಿ. #RIP #ShriMadhukarShetty 🙏🏻💐
- ತೀವ್ರ ಅವಶ್ಯಕತೆ ಇದ್ದಲ್ಲಿ ಮಾತ್ರ ಮನೆಯಿಂದಾಚೆ ಬನ್ನಿ 🙏🏻
- #ಭಾವಪೂರ್ಣ_ಶ್ರದ್ಧಾಂಜಲಿ ಕನ್ನಡ ಚಲನಚಿತ್ರ ನಟ ಹಾಗೂ ಅಪರೂಪದ ವ್ಯಕ್ತಿತ್ವದ ರಾಜಕಾರಣಿ ಅಂಬರೀಶ್ ರವರ ಅಕಾಲಿಕ ಮರಣ ಅಪಾರ ದುಃಖವನ್ನುಂಟುಮಾಡಿದೆ. ಈ ದುಃಖವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ದೇವರು ಕರುಣಿಸಲಿ. #RIP #Ambareesh #Condolences @BlrCityPolice





















